skip to main
|
skip to sidebar
ಮನದಾಳದ ಮಾತುಗಳು
Sunday, June 20, 2010
ಸ್ವಾಗತ.
ಸ್ವಾಗತ.
ಪೂರ್ಣಚಂದಿರನು ತನ್ನ ಮನೆಗೆ ಹೋಗಲು
ನಿನಗಾಗಿ ಕಾಯುತಿಹನು..
ಮುಂಜಾವಿನ ಇಬ್ಬನಿಯು
ನಿನ್ನ ಸ್ಪರ್ಶಕ್ಕೆ ಕಾಯುತಿಹುದು..
ಹಕ್ಕಿಗಳು ಚಿಲಿಪಿಲಿಯೆನ್ನುತ್ತ
ಇಂಚರವ ಹಾಡುತಿಹುದು..
ಬಾ ಭಾನುತೇಜನೇ
ನಿನಗಿದೋ ಸ್ವಾಗತ....
Thursday, March 4, 2010
ಬಂದುಬಿಡು
ಹುಣ್ಣಿಮೆ ಚಂದಿರನ ಬೆಳದಿಂಗಳಲಿ
ನನ್ನ ಹೃದಯದ ಬಾಗಿಲು ತೆರೆದು
ನಿನಗಾಗಿ ಕಾದಿಹೆನು..
ಬೆಳದಿಂಗಳಂತೆ ಬಂದುಬಿಡು
ನನ್ನ ಹೃದಯದೊಳಗಿನ ನಿನ್ನ ಮನೆಗೆ....
Friday, January 15, 2010
ಮಧುರ ನೆನಪು..
ಮಧುರ ನೆನಪು..
ನಿನ್ನ ಜೊತೆ ಕಳೆದ ಮಧುರ
ನೆನೆಪುಗಳೇ ಸಾಕು ನನಗೆ..
ನೀ ಬಿತ್ತಿದ ಸಾವಿರಾರು ಸ್ವಪ್ನಗಳ
ಆನಂದ ಸಾಗರ
ಜೀವ ಭಾವಗಳು ರಂಗೇರಿ
ಮೈ ಮನಗಳಲ್ಲಿ ಝೇಂಕಾರ....
ನಿನ್ನ ಜೊತೆ ಕಳೆದ ಮಧುರ
ನೆನೆಪುಗಳೇ ಸಾಕು ನನಗೆ..
ಮುಸ್ಸಂಜೆಯಲಿ ಮುದ ತಂದ
ಪ್ರೇಮ ಸೌರಭ
ಹೊಂಗನಸಿನ ಓಕುಳಿಯಲಿ
ರಂಗು ರಂಗಾಯಿತು ನೀಲ ಗಗನ....
ನಿನ್ನ ಜೊತೆ ಕಳೆದ ಮಧುರ
ನೆನೆಪುಗಳೇ ಸಾಕು ನನಗೆ..
ಅದನ್ನೇ ನೆನೆದು ಬದುಕುವೆ
ಸಾವಿರ ವರುಷ
ಹೃದಯದ ಹಾಡಿಗೆ ಶೃತಿಯಾಗುವೆ
ಪ್ರತಿ ನಿಮಿಷ....
Newer Posts
Older Posts
Home
Subscribe to:
Posts (Atom)
Blog Archive
▼
2010
(3)
▼
June
(1)
ಸ್ವಾಗತ.
►
March
(1)
ಬಂದುಬಿಡು
►
January
(1)
ಮಧುರ ನೆನಪು..
►
2009
(5)
►
December
(2)
►
November
(3)
ನನ್ನ ಬಗ್ಗೆ.....
ಸುಬ್ರಹ್ಮಣ್ಯ ಹೆಗಡೆ
ನನ್ನ ಬಗ್ಗೆ ಹೇಳಿಕೊಳ್ಳುವಂತದ್ದೇನು ಇಲ್ಲ. ಮನಸ್ಸಿಗೆ ಬಂದಿದ್ದನ್ನು ಇಲ್ಲಿ ಗೀಚುವ ಬಯಕೆ.....
View my complete profile
Followers